ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಇದೊಂದು ನೋವು ನಿವಾರಕ ಔಷಧಿ. ನೋವನ್ನು ನಿವಾರಿಸುವ ಈ ಔಷಧಿ ಬಗೆಗೆ ನಂಬಿಕೆ ಇಟ್ಟಿದ್ದ ಜನಕ್ಕೆ ಒಂದು ಶಾಕ್ ಆಗುವ ಸುದ್ಧಿ ಹೊರಬಿದ್ದಿದೆ. ನ್ಯೂ‌ಆರ್ಲಿಯನ್ಸನಲ್ಲಿ ವಾಸಿಸುವ ಟೂಲೆನ್ ಯುನಿವರ್ಸಿಟಿಯ ಸ್ಕೂಲ್ ಆಫ್ ಪ್ಲಬಿಕ್‌ಹೆಲ್ಥ್ Tapicol Medician ನ ಡಾ|| ಜಿಯೆಂಗ್ ಹೀ ಮತ್ತು ಅವರ ತಂಡವು ಇದರ ಸೇವನೆಯಿಂದ “ಬ್ರೇನ್ ಹ್ಯಾಮರೇಜ್” ಆಕ್ರಮಣವಾಗುತ್ತದೆಂದು ಪ್ರಯೋಗಗಳಿಂದ ಸ್ಥಿರೀಕರಿಸಿದ್ದಾರೆ. ಜತೆಗೆ ಇಸೆಮಿಕ್ ಕೂಡ ಆಕ್ರಮಿಸುತ್ತದೆಂದು ಹೇಳುತ್ತಾರೆ.

ಇದನ್ನು ಸೇವಿಸುವುದರಿಂದ ದಮನಿಗಳಲ್ಲಿ ಅಡಚಣೆಯುಂಟಾಗಿ ಪರಿಣಾಮವಾಗಿ ಮೆದುಳಿಗೆ ರಕ್ತ ಹಾಗೂ ಪ್ರಾಣವಾಯುವಿನ ಪೂರೈಕೆಯು ಆಗುವುದಿಲ್ಲವೆಂದು ವಿವರಿಸುತ್ತಾರೆ. ವೃದ್ಧರು ವಿಶೇಷವಾಗಿ ಹೈಬ್ಲಡ್ ಪ್ರೆಶರ್ ಇರುವ ರೋಗಿಗಳಿಗೆ ಬ್ರೇನ್ ಹ್ಯಾಮರೇಜಿನ ಅಪಾಯ ಹೆಚ್ಚಾಗಿರುತ್ತದೆ. ವಿಪರೀತ ತಲೆನೋವು, ಒಮ್ಮಲೆ – ಮೂರ್ಚೆ ಹೋಗುವುದು, ಧ್ವನಿಬಾರದಿರುವುದು. ಮುಖ ಹಾಗು ಕೈ ಕಾಲುಗಳಲ್ಲಿ ಲಕ್ವ ಹೊಡೆದಂತಾಗಿ ನಿಶಕ್ತಿ ಆವರಿಸುವುದು ಮುಂತಾದವು ಇದರ ಲಕ್ಷಣಗಳಾಗಿವೆ.

ಹೀ ಮತ್ತು ಇವರ ಅನುಮಾಯಿಗಳು ೧೮ ವಿಭಿನ್ನ ಪರೀಕ್ಷೆಗಳಲ್ಲಿ೫೫,೪೬೨ ರೋಗಿಗಳಿಗೆ ಆಸ್ಟ್ರೀನ್ ಸೇವನೆ ಮಾಡಿಸಿ ನಂತರ ಪರೀಕ್ಷಿಸಿದಾಗ ಇವರಲ್ಲಿ ಶೇ. ೧೫ ರಷ್ಟು ರೋಗಿಗಳಿಗೆ ಬ್ರೇನ್ ಹ್ಯಾಮರೇಜ್ ಆಕ್ರಮಣವಾದುದು ದೃಢಪಟ್ಟಿತು. ಉಳಿದಂತೆ ರೋಗಿಗಳಿಗೆ ಇಸೆಮಿಕ್ ಅಟ್ಯಾಕ್ ಆಗಿತ್ತು. ಆದ್ದರಿಂದ ನೋವು ನಿವಾರಕವೆಂದು ಇದನ್ನು ಸೇವಿಸುವ ರೋಗಿಗಳು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಸೇವಿಸುವುದು ಅಗತ್ಯ. ಕೆಲವು ಔಷಧಿಗಳು ತಕ್ಷಣಕ್ಕೆ ಪರಿಹಾರವನ್ನು ಸೂಚಿಸಿದರೂ ನಿಧಾನವಾಗಿ ಸ್ಲೋಪಾಯಿಜನ್ ಆಗುವ ಭೀತಿ ಇರುತ್ತದೆ. ಹಾಗಾದರೆ ಈ ದೇಹ ನೆಟ್ಟಗಿರಬೇಕಾದರೆ ಯಾವುದನ್ನು ಸೇವಿಸಬೇಕು? ಎಲ್ಲವನ್ನು ಒಬ್ಬ ಸಾಮಾನ್ಯ ರೋಗಿ ವೈಜ್ಞಾನಿಕವಾಗಿ ಪರೀಕ್ಷೆಗೆ ಗುರಿ ಮಾಡುತ್ತಾನೆಯೋ? ಎಂಬ ಪ್ರಶ್ನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿರಹ ಗಾಥೆ
Next post ದೀಪವಾಗು ಗೆಳೆಯ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

cheap jordans|wholesale air max|wholesale jordans|wholesale jewelry|wholesale jerseys